Print
XClose
Press Information Bureau
Government of India
ಪ್ರಧಾನ ಮಂತ್ರಿಯವರ ಕಛೇರಿ
19 NOV 2021 8:57AM by PIB Bengaluru
ರಾಣಿಲಕ್ಷ್ಮೀ ಬಾಯಿ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀ ಬಾಯಿ ಅವರ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಪರಾಕ್ರಮಿ ರಾಣಿ ಲಕ್ಷ್ಮೀಬಾಯಿ ಜಯಂತಿ ಅಂಗವಾಗಿ ನಾನು ಅವರಿಗೆ ನಮನ ಸಲ್ಲಿಸುತ್ತೇನೆ. ಭಾರತದ ಇತಿಹಾಸದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಅವರ ಶೌರ್ಯವನ್ನು ಎಷ್ಟು ತಲೆಮಾರುಗಳಾದರೂ ಮರೆಯಲಾಗದು. ಭಾರತದ ರಕ್ಷಣಾ ಕ್ಷೇತ್ರವನ್ನು ಬಲಪಡಿಸುವುದಕ್ಕೆ ಸಂಬಂಧ ಝಾನ್ಸಿಯಲ್ಲಿಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು  ಎದುರು ನೋಡುತ್ತಿದ್ದೇನೆ.’’ ಎಂದು ಹೇಳಿದ್ದಾರೆ.

***